Thursday, June 3, 2010

ಆದರ್ಶಗಳು...........

ಕನಸುಗಳು ಭದ್ರವಾಗಿ ಕೋಟೆ
ಕೊತ್ತಲದಲ್ಲಿ ಹಿತವಾಗಿ ನಿದ್ರಿಸಿದೆ,
ಅದನ್ನು ಎಬ್ಬಿಸಿ ಗುರಿಯೆಡೆಗೆ
ಕಳುಹಿಸುವವರ್ರ್ಯಾರು?

ಗುರಿ ತಿಳಿಯದ, ದಾರಿ ತಪ್ಪಿದ ನಾವಿಕ,
ಸಾಗರ ಮದ್ಯದಿ ತತ್ತರಿಸಿದ್ದಾನೆ,
ಅವನಿಗೆ ಆಶ್ವಾಸನೆಯೊ೦ದಿಗೆ ದಡಕೆ
ದಾರಿ ತೋರುವರ್ಯಾರು?

ಮನಸ್ಸು ಬೆತ್ತಲಾಗಿಎತ್ತಲ್ಲೆ೦ದರಲ್ಲಿ
ಹದತಪ್ಪಿ ಓಡುತಿದೆ,
ಅದಕ್ಕೆ ಅ೦ಕುಶ ಹಾಕಿ ಒ೦ದು ಕಡೆ
ನಿಲ್ಲಿಸುವರ್ಯಾರು?

ವೀಣೆ,ತ೦ತಿ ಹರಿದು ರಾಗ ತಪ್ಪಿ
ಶ್ರುತಿ ಇಲ್ಲದೇ ಮೀಟುತಿದೆ
ಹರಿದ ತ೦ತಿಯ ಬಿಗಿದು ಅದಕೆ
ಶ್ರುತಿ ನೀದುವವರ್ಯಾರು?

ಇದಕೆಲ್ಲ ಉತ್ತರ ಇದೆ ನಿನ್ನಲ್ಲೆ,
ಓ ಮನುಜ, ನಿಧಾನದಿ೦
ಕುಳಿತು, ನಿನ್ನ ಭಾವವ ಅರಿತು ನೊಡು,
ನಿನಗೇ ಸಿಗುವುದು ಇದಕುತ್ತರ...
ಗುರಿಯ ಕನಸನು ಬಡಿದೆಬ್ಬಿಸು,
ಧೈರ್ಯದಿ೦ ದೋಣಿಯ ಮುನ್ನೆಡೆಸು
ಎಲ್ಲಾ ನೀರಿಗೂ ಒ೦ದಲ್ಲ ಒ೦ದು ತೀರವು೦ಟು..
ಮನಸ್ಸನ್ನು ಕರ್ತವ್ಯಕ್ಕಿಳಿಸು,
ಹರಿದ ತ೦ತಿಯ ಬಿಗಿದು ನೋಡು,
ಶ್ರುತಿ ತನ್ನಿ೦ದ ತಾನೆ ಹೊರ ಹೊಮ್ಮುವುದು.........
ಮೂಢ....................

Tuesday, June 1, 2010

ಭೀತಿ.......................

ಎಲ್ಲಾ ರೀತಿಯ ಭೀತಿಗಿ೦ತಲೂ ಸಾವಿನ ಭೀತಿ ಮನುಶ್ಯನಲ್ಲಿ ತು೦ಬಾ ಆಳವಾಗಿ ಬೇರು ಬಿಟ್ಟಿರುತ್ತದೆ.
ಸ್ವ ರಕ್ಶಣಾ ಭಾವನೆಯು ಮನುಶ್ಯನನ್ನು ಹಲವು ಭ್ರಾ೦ತಿಗಳತ್ತ ಕೊ೦ಡೊಯ್ಯುತ್ತದೆ. ಮನುಶ್ಯ ನಿರ೦ತರವಾಗಿ ಭಯದ ಬೆನ್ನು ಹತ್ತಿರುತ್ತಾನೆ.ಆತ ತನ್ನ ಸಮತೆಯನು ಕಳೆದುಕೊಳ್ಳುವದಲ್ಲದೇ ತನಗೆ ಬೇಕಾದ ಹಾಗೆ ಭಾವನೆಗಳನ್ನು ರೂಪಿಸುವ, ಯೋಜಿಸುವ ಸನ್ನಾಹದಲ್ಲಿ ತೊಡಗುತ್ತಾನೆ. ಇದನ್ನು ಪುನರಾವರ್ತನೆ ಮಾಡುತ್ತಾ ಭಯದ ಸ್ಥಿತಿಯನ್ನು ತೀವ್ರಗೊಳಿಸುತ್ತಾನೆ.
ಭಯ ಮನುಶ್ಯನ ಅತಿ ದೊಡ್ಡ ಶತ್ರು. ಮನುಶ್ಯನೇ ಪ್ರೇತಗಳ ರಾಜ.ತನ್ನನ್ನು ತಾನು ಮನಸ್ಸಿನ ಆಕಾರಗಳೊಡನೆ ಗುರುತಿಸಿ ಕೊಳ್ಳುವವರಿಗೆ ಈತನೇ ಒ೦ದು ಪ್ರೇತ....
ಆದರೆ....................
................
................

ತನ್ನ ಮೂಲ ಸ್ವಭಾವದ ಸ್ವ ಸ್ವರೂಪದ ಎಚ್ಚರ ಮೂಡಿದ ದಿನ ಆತ ಎಲ್ಲ ಭೀತಿಗಳಿ೦ದಲೂ ಮುಕ್ತ..